Published on: June 6, 2025
ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ
ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ
ಸುದ್ದಿಯಲ್ಲಿ ಏಕಿದೆ? ಬೆಂಗಳೂರಿನಲ್ಲಿ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ ಫಲಾನುಭವಿಗಳು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲಕ್ಕೆ ರಾಜ್ಯ ಸರಕಾರದಿಂದಲೇ ಬಡ್ಡಿ ಸಬ್ಸಿಡಿ ನೀಡುವ ಕುರಿತು ಸಭೆಯಲ್ಲಿಅನುಮೋದನೆ ನೀಡಲಾಯಿತು”.
ಕರ್ನಾಟಕ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ
- ಪ್ರಾರಂಭ: 2017ರಲ್ಲಿ
- ಈ ಯೋಜನೆಯನ್ನು ಬೆಂಗಳೂರು ಮನೆ ಯೋಜನೆ ಎಂದೂ ಕರೆಯಲಾಗುತ್ತದೆ.
- ಯೋಜನೆಯು ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಒಂದು ಭಾಗವಾಗಿದೆ
- ಗುರಿ: ಬೆಂಗಳೂರಿನಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮತ್ತು ಕಡಿಮೆ ಆದಾಯದ ಜನರಿಗೆ ಕೈಗೆಟುಕುವ ದರದಲ್ಲಿ ಮನೆ ಒದಗಿಸುವ ಗುರಿಯನ್ನು ಹೊಂದಿದೆ.
- ಉದ್ದೇಶ: ಬೆಂಗಳೂರು ನಗರ ಜಿಲ್ಲೆಯೊಳಗೆ 100,000 ಬಹುಮಹಡಿ ಮನೆ ಘಟಕಗಳನ್ನು ನಿರ್ಮಿಸುವುದು ಈ ಯೋಜನೆಯ ಉದ್ದೇಶವಾಗಿದೆ.
- ಬೆಂಗಳೂರಿನಲ್ಲಿ ಕನಿಷ್ಠ ಐದು ವರ್ಷಗಳ ವಾಸವಿರುವ ಬಿಪಿಎಲ್ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ಕುಟುಂಬಗಳು ಸೇರಿದಂತೆ ಅರ್ಹ ಫಲಾನುಭವಿಗಳಿಗೆ 1 BHK ಮತ್ತು 2 BHK ಬಹುಮಹಡಿ ಫ್ಲಾಟ್ಗಳನ್ನು ಈ ಯೋಜನೆಯು ಒದಗಿಸುತ್ತದೆ.
- ಯೋಜನೆಯಡಿ ಹೊಸ ಮನೆ ನಿರ್ಮಾಣಕ್ಕೆ ಅಥವಾ ಹಳೆಯ ಮನೆಗಳ ನವೀಕರಣಕ್ಕೆ ರಾಜ್ಯ ಸರ್ಕಾರವು ಸಬ್ಸಿಡಿಗಳನ್ನು ನೀಡಲಿದೆ.
ಅರ್ಹತಾ ಮಾನದಂಡಗಳು:
- ಕುಟುಂಬದ ವಾರ್ಷಿಕ ಆದಾಯ ₹87,000 ಮೀರಬಾರದು.
- ಅರ್ಜಿದಾರರು ಕಳೆದ ಐದು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರಬೇಕು.
- ಅರ್ಜಿದಾರರು ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ವರ್ಗ ಅಥವಾ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರಾಗಿರಬೇಕು.
- ಅರ್ಜಿದಾರರು ಈ ಹಿಂದೆ ಇತರ ಸರ್ಕಾರಿ ಮನೆ ಯೋಜನೆಗಳಿಂದ ಪ್ರಯೋಜನಗಳನ್ನು ಪಡೆದಿರಬಾರದು ಅಥವಾ ಸ್ವಂತ ಮನೆ ಹೊಂದಿರಬಾರದು.
- 1 ಲಕ್ಷ ಫಲಾನುಭವಿಗಳ ಕೋಟಾ ಭರ್ತಿಯಾಗುವವರೆಗೆ ಅರ್ಜಿಗಳನ್ನು ಮೊದಲು ಬಂದವರಿಗೆ ಆದ್ಯತೆ ಎಂಬ ಆಧಾರದ ಮೇಲೆ ಪ್ರಕ್ರಿಯೆಗೊಳಿಸಲಾಗುತ್ತದೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ
- ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಭಾರತ ಸರ್ಕಾರದ ಸಾಮಾಜಿಕ ಕಲ್ಯಾಣದ ಪ್ರಮುಖ ಕಾರ್ಯಕ್ರಮವಾಗಿದೆ.
- ಪ್ರಾರಂಭ: 2015ರಲ್ಲಿ
- ದೇಶದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಅರ್ಹ ಫಲಾನುಭವಿಗಳಿಗೆ ಪಕ್ಕಾ ಮನೆಗಳನ್ನು ಒದಗಿಸಲು ಇದನ್ನು 2015ರಲ್ಲಿ ಪ್ರಾರಂಭಿಸಲಾಯಿತು.
- “ಎಲ್ಲರಿಗೂ ವಸತಿ” ಒದಗಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
- ಇದು ಪ್ರಮುಖವಾಗಿ ಎರಡು ವಿಭಾಗಗಳನ್ನು ಹೊಂದಿದೆ.
- ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMY-U) ಮತ್ತು
- ಪ್ರಧಾನ ಮಂತ್ರಿ ಆವಾಸ್ ಯೋಜನೆ-ಗ್ರಾಮೀಣ (PMY-G) ಯೋಜನೆಗಳು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ವಸತಿ ಕೊರತೆಯನ್ನು ಪರಿಹರಿಸುತ್ತದೆ.
- ಈ ಹಿಂದೆ 1985ರಲ್ಲಿ ಸರ್ಕಾರವು ಪ್ರಾರಂಭಿಸಿದ ಇಂದಿರಾ ಆವಾಸ್ ಯೋಜನೆಯ ಮುಂದುವರಿದ ಭಾಗವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
- ಈ ಯೋಜನೆಯಡಿಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರವು ಬಯಲು ಪ್ರದೇಶಗಳಲ್ಲಿ 60:40 ಅನುಪಾತದಲ್ಲಿ ಮತ್ತು ಈಶಾನ್ಯ ರಾಜ್ಯಗಳು, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಜಮ್ಮು ಮತ್ತು ಕಾಶ್ಮೀರಗಳಿಗೆ 90:10 ಅನುಪಾತದಲ್ಲಿ ಪ್ರತಿ ಮನೆಗೆ ಸಹಾಯಧನವನ್ನು ಹಂಚಿಕೆ ಮಾಡಲಾಗುತ್ತದೆ.
- ಫಲಾನುಭವಿಗಳು: ಮಹಿಳೆಯರು (ವಿಶೇಷವಾಗಿ ವಿಧವೆಯರು, ಒಂಟಿ ತಾಯಂದಿರು), SC/ST ಮತ್ತು ಇತರ ಹಿಂದುಳಿದ ವರ್ಗಗಳು (OBC), ಅಲ್ಪಸಂಖ್ಯಾತ ಗುಂಪುಗಳು, ಅಂಗವಿಕಲ ವ್ಯಕ್ತಿಗಳು, ಹಿರಿಯ ನಾಗರಿಕರು