Published on: June 13, 2025

ಸುಸ್ಥಿರ ಜಲಾನಯನ ನಿರ್ವಹಣೆ ಕುರಿತು ರಾಷ್ಟ್ರೀಯ ಸಮ್ಮೇಳನ

ಸುಸ್ಥಿರ ಜಲಾನಯನ ನಿರ್ವಹಣೆ ಕುರಿತು ರಾಷ್ಟ್ರೀಯ ಸಮ್ಮೇಳನ

ಸುದ್ದಿಯಲ್ಲಿ ಏಕಿದೆ? ಜೂನ್ 3ರಿಂದ 5ರವರೆಗೆ ಜಿಕೆವಿಕೆಯ ಡಾ. ಬಾಬು ರಾಜೇಂದ್ರ ಪ್ರಸಾದ್‌ ಅಂತರರಾಷ್ಟ್ರೀಯ ಸಭಾಂಗಣದಲ್ಲಿ ‘ಭೂ ಸಂಪನ್ಮೂಲ ಸಮೀಕ್ಷೆ ಆಧಾರಿತ ಸುಸ್ಥಿರ ಜಲಾನಯನ ನಿರ್ವಹಣೆ ಕುರಿತು ರಾಷ್ಟ್ರೀಯ ಸಮ್ಮೇಳನ’ ಆಯೋಜಿಸಲಾಗಿತ್ತು.

ಮುಖ್ಯಾಂಶಗಳು

ಸಹಯೋಗ: ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಲಾನಯನ ನಿರ್ವಹಣೆಯ ಉತ್ಕೃಷ್ಟ ಕೇಂದ್ರ, ಜಲಾನಯನ ಅಭಿವೃದ್ಧಿ ಇಲಾಖೆ, ಭೂ ಸಂಪನ್ಮೂಲ ಅಭಿವೃದ್ಧಿ ಇಲಾಖೆ

ಉದ್ದೇಶ ಮತ್ತು ಗುರಿ

  • ವಿಶ್ವ ಬ್ಯಾಂಕ್‌ ಆರ್ಥಿಕ ನೆರವಿನೊಂದಿಗೆ ಕರ್ನಾಟಕ ಹಾಗೂ ಒಡಿಶಾ ರಾಜ್ಯಗಳಲ್ಲಿ ನವೀನ ವಿಧಾನಗಳಿಂದ ಜಲಾನಯನ ಪ್ರದೇಶವನ್ನು ಪುನಶ್ಚತನಗೊಳಿಸಿ, ಕೃಷಿಯಲ್ಲಿ ಸ್ಥಿತಿಸ್ಥಾಪಕತ್ವ ಸಾಧಿಸುವ ರಿವಾರ್ಡ್ ಯೋಜನೆಯನ್ನು ಜಾರಿಗೊಳಿಸಲಾಗಿದೆ.
  • 2022ರಿಂದ 2026ರವರೆಗೆ 34 ಲಕ್ಷ ಹೆಕ್ಟೇ‌ರ್ ಪ್ರದೇಶದಲ್ಲಿ ನವೀನ ವಿಧಾನಗಳ ಮೂಲಕ ಜಲಾನಯನ ಪ್ರದೇಶ ಅಭಿವೃದ್ಧಿಪಡಿಸುವ ಗುರಿ ಇದೆ

ಜಲಾನಯನ ಅಭಿವೃದ್ಧಿ ಉತ್ಕೃಷ್ಟತಾ ಕೇಂದ್ರ

  • ಕೃಷಿಯಲ್ಲಿ ಸ್ಥಿತಿಸ್ಥಾಪಕತ್ವ ಸಾಧಿಸುವ ನಿಟ್ಟಿನಲ್ಲಿ ಬೆಂಗಳೂರು ಕೃಷಿ ವಿವಿಯ ಜಿಕೆವಿಕೆಯಲ್ಲಿ ಜಲಾನಯನ ಅಭಿವೃದ್ಧಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲಾಗಿದೆ.
  • ಈ ಕೇಂದ್ರವು ದೇಶದ ಎಲ್ಲ ರಾಜ್ಯಗಳಲ್ಲಿನ ಜಲಾನಯನ ಅಭಿವೃದ್ಧಿಯನ್ನು ರಿವಾರ್ಡ್ ಯೋಜನೆಯಲ್ಲಿ ಅಳವಡಿಸಿರುವ ಮಾದರಿಯನ್ನು ಉನ್ನತೀಕರಿಸಲು ಬೇಕಿರುವ ವಿಧಾನಗಳ ಬಗ್ಗೆ ಅಧಿಕಾರಿಗಳಿಗೆ ಸಾಮರ್ಥ್ಯ ಬಲವರ್ಧನೆಗೆ ಕೆಲಸ ಮಾಡುತ್ತಿದೆ.
  • ಕೇಂದ್ರದಿಂದ 923 ಅಧಿಕಾರಿ/ವಿಜ್ಞಾನಿ ಹಾಗೂ ಜಲಾನಯನ ನಿರ್ವಹಣೆಯ ಸಿಇಒಗಳಿಗೆ ನವೀನ ಪದ್ಧತಿಗೆ ತರಬೇತಿ ನೀಡಲಾಗಿದೆ

600 ಕೋಟಿ ರೂ. ರೂ. ಯೋಜನೆ:

ರಾಜ್ಯದಲ್ಲಿ ಅನುಷ್ಠಾನಿಸುತ್ತಿರುವ ಜಲಾನಯನ ಅಭಿವೃದ್ಧಿ ಕಾರ್ಯಕ್ರಮವು 600 ಕೋಟಿ ರೂ. ವೆಚ್ಚದ್ದಾಗಿದೆ.

  • ವಿಶ್ವಬ್ಯಾಂಕ್ 420 ಕೋಟಿ ರೂ. ನೆರವು ನೀಡಿದ್ದು,
  • 180 ಕೋಟಿ ರೂ. ರಾಜ್ಯ ಸರ್ಕಾರ ಭರಿಸುತ್ತಿದೆ.