Published on: June 6, 2025

ಚುಟುಕು ಸಮಾಚಾರ : 6th ಜೂನ್ 2025

ಚುಟುಕು ಸಮಾಚಾರ : 6th ಜೂನ್ 2025

  • ‘ಬೆಂಗಳೂರು ಹವಾಮಾನ ಕಾರ್ಯಯೋಜನೆ’: ವಿಶ್ವ ಪರಿಸರ ದಿನದಂದು (ಜೂನ್ 5) ‘ಬೆಂಗಳೂರು ಹವಾಮಾನ ಕಾರ್ಯಯೋಜನೆ’ ಕ್ಲಬ್ ಸ್ಥಾಪಿಸಲಾಗುತ್ತಿದೆ. ಇದರಲ್ಲಿ ಒಬ್ಬ ಶಿಕ್ಷಕ ಹಾಗೂ ಕನಿಷ್ಠ 25 ವಿದ್ಯಾರ್ಥಿಗಳು ಇರಲಿದ್ದಾರೆ. ಅವರಿಗೆ ಅಗತ್ಯವಾದ ಪ್ರಮಾಣಪತ್ರ, ಗುರುತುಪತ್ರ ನೀಡಲಾಗುವುದು’. ‘ಈ ಕ್ಲಬ್‌ಗಳ ಮೇಲ್ವಿಚಾರಣೆಗೆ ಅಧಿಕಾರಿಗಳ ತಂಡ ನೇಮಿಸಲಾಗಿದೆ. ವಿಶೇಷ ಆಯುಕ್ತರು ಇದರ ಭಾಗವಾಗಿರುತ್ತಾರೆ. ದೇಶದಲ್ಲಿ ಮುಂಬೈ, ಚೆನ್ನೈ ಮತ್ತು ಬೆಂಗಳೂರು ಈ ಮೂರು ನಗರಗಳು ಹವಾಮಾನ ಕಾರ್ಯಯೋಜನೆಯಲ್ಲಿ ತೊಡಗಿಸಿಕೊಂಡಿವೆ. ಜಿಬಿಎ ವ್ಯಾಪ್ತಿಯಲ್ಲಿ ಆರು ಸಾವಿರ ಶಾಲೆಗಳಿದ್ದು, ಅದರಲ್ಲಿ 4,500 ಖಾಸಗಿ, 1,500 ಸರ್ಕಾರಿ ಶಾಲೆಗಳಿವೆ. ಎಲ್ಲ ಶಾಲೆಗಳು ಈ ಯೋಜನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ. ಈಗಾಗಲೇ 18 ಕ್ಲಬ್‌ಗಳು ರಚನೆಯಾಗಿ ಕಾರ್ಯನಿರ್ವಹಿಸುತ್ತಿವೆ’. ಈ ಕ್ಲಬ್‌ಗಳನ್ನು ರಚಿಸಲು ಸಾರ್ವಜನಿಕ ಸಂಘ-ಸಂಸ್ಥೆಗಳಿಗೂ ಅವಕಾಶ ನೀಡಲಾಗುವುದು. ಅವುಗಳ ನೋಂದಣಿಗೆ ವೆಬ್‌ಸೈಟ್ ಅನಾವರಣಗೊಳಿಸಲಾಗುವುದು.  ‘ಕ್ಲಬ್‌ಗಳಲ್ಲಿ ಭಾಗವಹಿಸುವವರಿಗೆ ಹಸಿರು ಇಂಧನ, ಘನತ್ಯಾಜ್ಯ ನಿರ್ವಹಣೆ, ಗಾಳಿ ಗುಣಮಟ್ಟ, ತ್ಯಾಜ್ಯ ನೀರು, ಮಳೆನೀರು, ನಗರ ಯೋಜನೆ, ವಿಪತ್ತು ನಿರ್ವಹಣೆ ವಿಚಾರಗಳನ್ನು ಪರಿಗಣಿಸಿ ಬ್ಲೂ, ಗ್ರೀನ್‌ ಪ್ರಶಸ್ತಿ ನೀಡಲಾಗುತ್ತದೆ.
  • ಫ್ರಾನ್ಸನ ಡಸಾಲ್ಟ್ ಏವಿಯೇಷನ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ ರಫೇಲ್ ಯುದ್ಧ ವಿಮಾನದ ಫ್ಯೂಸ್ಲೇಜ್(ಬಾಡಿ ಚೌಕಟ್ಟು)ಗಳನ್ನು ಭಾರತದಲ್ಲಿ ಉತ್ಪಾದಿಸಲು ನಾಲ್ಕು ಉತ್ಪಾದನಾ ವರ್ಗಾವಣೆ ಒಪ್ಪಂದಗಳಿಗೆ ಸಹಿ ಹಾಕಿವೆ. ಫ್ರೆಂಚ್ ವಿಮಾನ ತಯಾರಕ ಡಸಾಲ್ಟ್ ಏವಿಯೇಷನ್, ಟಾಟಾ ಗ್ರೂಪ್ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ರಫೇಲ್ ಯುದ್ಧ ವಿಮಾನಗಳ ಫ್ಯೂಸ್ಲೇಜ್ಗಳನ್ನು ಭಾರತದಲ್ಲಿ ಉತ್ಪಾದಿಸಲು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (ಟಿಎಎಸ್ಎಲ್) ಜೊತೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ ಹೈದರಾಬಾದ್ನಲ್ಲಿ ಉತ್ಪಾದನಾ ಘಟಕ ಸ್ಥಾಪನೆಯಾಗಲಿದ್ದು, 2028ರಲ್ಲಿ ಮೊದಲ ಭಾಗಗಳು ಹೊರಬರುವ ನಿರೀಕ್ಷೆಯಿದೆ.
  • ವಿಶ್ವ ಪರಿಸರ ದಿನ. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ನಿವಾಸದ ಅಂಗಳದಲ್ಲಿ ವಿಶೇಷವಾದ ಸಿಂಧೂರ ಸಸಿ ನೆಟ್ಟರು. ಈ ಸಸಿಯನ್ನು 1971ರ ಯುದ್ಧದಲ್ಲಿ ಅಪ್ರತಿಮ ಧೈರ್ಯ ತೋರಿದ್ದ ಮಹಿಳಾ ಗುಂಪೊಂದು ಪ್ರಧಾನಿ ಅವರಿಗೆ ಇತ್ತೀಚಿಗೆ ನೀಡಿದ್ದರು. ಇದು ಮಹಿಳೆಯರ ಶೌರ್ಯ ಮತ್ತು ಸ್ಫೂರ್ತಿಯ ದೃಢವಾದ ಸಂಕೇತವಾಗಿದೆ. ಅನ್ನಾಟೊ ಅಥವಾ ಬಿಕ್ಸಾ ಒರೆಲ್ಲಾನಾ ಎಂದು ಕರೆಯಲಾಗುವ ‘ಸಿಂದೂರ ಮರ’ವನ್ನು ಲಿಪ್ಸ್ಟಿಕ್ ಟ್ರೇ ಅಂತಲೂ ಕರೆಯಲಾಗುತ್ತದೆ. ಕೆಂಪು ವರ್ಣದ ಹೂವು ಬಿಡುತ್ತದೆ. ಹಣ್ಣಿನ ಬೀಜಗಳನ್ನು ಸಿಂದೂರ ತಯಾರಿಸಲು ಬಳಸಲಾಗುತ್ತದೆ ಎಂಬ ಕಾರಣಕ್ಕೆ ಈ ಹೆಸರು ಬಂದಿದೆ.
  • ವಿಶ್ವ ಪರಿಸರ ದಿನದಂದು (ಜೂನ್ 5, 2025), ದೆಹಲಿಯಿಂದ ಗುಜರಾತ್ವರೆಗೆ ಅರವಳ್ಳಿ ಪರ್ವತ ಶ್ರೇಣಿಯನ್ನು ಮರು ಅರಣ್ಯೀಕರಣಗೊಳಿಸಲು ‘ಅರಾವಳಿ ಹಸಿರು ಗೋಡೆ ಯೋಜನೆ(ಅರಾವಳಿ ಗ್ರೀನ್ ವಾಲ್ ಪ್ರಾಜೆಕ್ಟ್)ಯ’ ಭಾಗವಾಗಿ ಪ್ರಧಾನ ಮಂತ್ರಿ ಅವರು ‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನ ಉಪಕ್ರಮವನ್ನು ವಿಸ್ತರಿಸಿದರು. ಈ ಉಪಕ್ರಮದ ಭಾಗವಾಗಿ, ಹರಿಯಾಣ ಸರ್ಕಾರವು 25,000 ಹೆಕ್ಟೇರ್ ಪಾಳುಬಿದ್ದ ಅರಣ್ಯ ಭೂಮಿಯನ್ನು ಪುನಃಸ್ಥಾಪಿಸಲಿದೆ. ವಿಶ್ವ ಪರಿಸರ ದಿನ 2025: ಜಾಗತಿಕವಾಗಿ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವತ್ತ ಗಮನಹರಿಸಿ ಕೊರಿಯಾ ಗಣರಾಜ್ಯವು WED 2025 ಅನ್ನು ಆಯೋಜನೆ ಮಾಡಿತ್ತು.  2025 ರ ಥೀಮ್ 2025 ರ ಥೀಮ್ ‘ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು’. 2025 ರ ಘೋಷವಾಕ್ಯವೆಂದರೆ ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸಿ ಸುಸ್ಥಿರತೆಯನ್ನು ಅಳವಡಿಸಿಕೊಳ್ಳುವುದು
  • ಬೆಂಗಳೂರಿನಲ್ಲಿ ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ ಫಲಾನುಭವಿಗಳು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲಕ್ಕೆ ರಾಜ್ಯ ಸರಕಾರದಿಂದಲೇ ಬಡ್ಡಿ ಸಬ್ಸಿಡಿ ನೀಡುವ ಕುರಿತು ಸಭೆಯಲ್ಲಿಅನುಮೋದನೆ ನೀಡಲಾಯಿತು”. ಕರ್ನಾಟಕ ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ: ಪ್ರಾರಂಭ: 2017ರಲ್ಲಿ, ಈ ಯೋಜನೆಯನ್ನು ಬೆಂಗಳೂರು ಮನೆ ಯೋಜನೆ ಎಂದೂ ಕರೆಯಲಾಗುತ್ತದೆ. ಯೋಜನೆಯು ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಒಂದು ಭಾಗವಾಗಿದೆ. ಗುರಿ: ಬೆಂಗಳೂರಿನಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಮತ್ತು ಕಡಿಮೆ ಆದಾಯದ ಜನರಿಗೆ ಕೈಗೆಟುಕುವ ದರದಲ್ಲಿ ಮನೆ ಒದಗಿಸುವ ಗುರಿಯನ್ನು ಹೊಂದಿದೆ. ಉದ್ದೇಶ: ಬೆಂಗಳೂರು ನಗರ ಜಿಲ್ಲೆಯೊಳಗೆ 100,000 ಬಹುಮಹಡಿ ಮನೆ ಘಟಕಗಳನ್ನು ನಿರ್ಮಿಸುವುದು ಈ ಯೋಜನೆಯ ಉದ್ದೇಶವಾಗಿದೆ.