Published on: June 4, 2025
ಚುಟುಕು ಸಮಾಚಾರ : 2nd ಜೂನ್ 2025
ಚುಟುಕು ಸಮಾಚಾರ : 2nd ಜೂನ್ 2025
- ಇತ್ತೀಚೆಗೆ, ಕೇಂದ್ರ ಸರ್ಕಾರವು ಟ್ರಾಲ್ ವನ್ಯಜೀವಿ ಅಭಯಾರಣ್ಯದ ಸುತ್ತಲೂ ಪರಿಸರ-ಸೂಕ್ಷ್ಮ ವಲಯ (ESZ)ವನ್ನು ಅಧಿಕೃತವಾಗಿ ಗೊತ್ತುಪಡಿಸಿದೆ. ಟ್ರಾಲ್ ವನ್ಯಜೀವಿ ಅಭಯಾರಣ್ಯದ ಬಗ್ಗೆ: ಇದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿದೆ. ಇದು ಹಂಗುಲ್(ಹಿಮ ಸಾರಂಗ)ನ ಚಲನೆಗೆ ಪ್ರಮುಖ ಕಾರಿಡಾರ್ ಅನ್ನು ರೂಪಿಸುತ್ತದೆ.
- ಇತ್ತೀಚೆಗೆ, ಮಹಿಳೆಯರ AI ಸಾಕ್ಷರತೆ ಮತ್ತು ಡಿಜಿಟಲ್ ಜಾಗೃತಿಯನ್ನು ಹೆಚ್ಚಿಸಲು ‘ಯಶೋದಾ AI: ನಿಮ್ಮ AI ಸಖಿ’ ಬರೇಲಿಯ ಮಹಾತ್ಮ ಜ್ಯೋತಿಬಾ ಫುಲೆ ರೋಹಿಲ್ಖಂಡ್ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಉದ್ದೇಶ – ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಜಾಗೃತಿಯಲ್ಲಿ ಮಹಿಳೆಯರ ಸಾಕ್ಷರತೆಯನ್ನು ಹೆಚ್ಚಿಸುವುದು. ಅಧ್ಯಕ್ಷತೆ: ರಾಷ್ಟ್ರೀಯ ಮಹಿಳಾ ಆಯೋಗ (NCW) ಫ್ಯೂಚರ್ ಶಿಫ್ಟ್ ಲ್ಯಾಬ್ಸ್ (FSL) ಸಹಯೋಗದೊಂದಿಗೆ ನಡೆಸಲಾಯಿತು.
- ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಮತ್ತು ಶೀಘ್ರವಾಗಿ ನ್ಯಾಯ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯಕ್ಕೆ ಅನುಕೂಲವಾಗುವಂತೆ ಉಪಬಂಧ ಕಲ್ಪಿಸಲು ಸಿವಿಲ್ ಪ್ರಕ್ರಿಯಾ ಸಂಹಿತೆ 1908ಕ್ಕೆ ತಿದ್ದುಪಡಿ ಮಾಡುವ “ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಅಧಿನಿಯಮ, 2024” ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಕರ್ನಾಟಕ ರಾಜ್ಯವು ನ್ಯಾಯಾಲಯಗಳಲ್ಲಿ ಬಾಕಿ ಇರುವ ಸಿವಿಲ್ ಪ್ರಕರಣಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಕಾನೂನನ್ನು ಜಾರಿಗೆ ತಂದ ಭಾರತದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಇತಿಹಾಸ ಸೃಷ್ಟಿಸಿದೆ. ಇನ್ನು ಮುಂದೆ 2 ತಿಂಗಳಲ್ಲೇ ಸಿವಿಲ್ ವ್ಯಾಜ್ಯಗಳು ಇತ್ಯರ್ಥ ತಿದ್ದುಪಡಿ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಅನುಮೋದಿಸಲಾಗಿತ್ತು.
- ಭಾರತೀಯ ಒಕ್ಕೂಟಕ್ಕೆ ಸಿಕ್ಕಿಂ ಏಕೀಕರಣಗೊಂಡ 50 ನೇ ವಾರ್ಷಿಕೋತ್ಸವದಂದು ಪ್ರಧಾನಿಯವರು ಮೇ 16, 1975 ರಂದು ಭಾರತದ 22 ನೇ ರಾಜ್ಯವಾಗಿ ಅದರ ಅಧಿಕೃತ ಮಾನ್ಯತೆಯನ್ನು ಗುರುತಿಸಿದರು. ಹಿನ್ನೆಲೆ: ಸಿಕ್ಕಿಂ 1642 ರಿಂದ 1975 ರವರೆಗೆ ಚೋಗ್ಯಲ್ ರಾಜವಂಶದಿಂದ ಆಳಲ್ಪಟ್ಟ ಆನುವಂಶಿಕ ರಾಜಪ್ರಭುತ್ವವಾಗಿತ್ತು.
- 2025 ರ 76 ನೇ ಗಣರಾಜ್ಯೋತ್ಸವದ ಮುನ್ನಾದಿನದಂದು ಹೆಸರುಗಳನ್ನು ಘೋಷಿಸಲಾದ 139 ಗಣ್ಯ ವ್ಯಕ್ತಿಗಳಿಗೆ ಭಾರತದ ರಾಷ್ಟ್ರಪತಿಗಳು 2025 ರ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. 1954 ರಲ್ಲಿ ಸ್ಥಾಪಿಸಲಾದ ಪದ್ಮ ಪ್ರಶಸ್ತಿಗಳು ಭಾರತದ ಅತ್ಯುನ್ನತ ನಾಗರಿಕ ಗೌರವಗಳಲ್ಲಿ ಸೇರಿವೆ, ಇದನ್ನು ವಾರ್ಷಿಕವಾಗಿ ಗಣರಾಜ್ಯೋತ್ಸವದಂದು (ಜನವರಿ 26) ಘೋಷಿಸಲಾಗುತ್ತದೆ. ಸಾರ್ವಜನಿಕ ಸೇವೆಯನ್ನು ಒಳಗೊಂಡ ವಿವಿಧ ಕ್ಷೇತ್ರಗಳಲ್ಲಿನ ಶ್ರೇಷ್ಠತೆಯನ್ನು ಗೌರವಿಸುವುದು ಉದ್ದೇಶವಾಗಿದೆ.